
ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದ ಶ್ರೀ ಮಹಾಕಾಳಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ನಾಯಕರಾದ ಸನ್ಮಾನ್ಯ ಶ್ರೀ ಪೃಥ್ವಿ ಕತ್ತಿಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಸ್ ಎಂ ಪಾಟೀಲ್, ಸಾರಾಪುರ ಪಿ ಕೆ ಪಿ ಎಸ್ ಅಧ್ಯಕ್ಷರಾದ ಶ್ರೀ ಶಂಕರ್ ಬಡಗಾಂವಿ, ವಾಸುದೇವ ಹಾಲಟ್ಟಿ, ಸಿದ್ದಪ್ಪಾ ಪೂಜೇರಿ, ಪುಟ್ಟಣ್ಣ ಚೌಗಲಾ, ಬಸಪ್ಪಾ ರಾಮಪ್ಪಾ ಮದಕರಿ, ಬಸಪ್ಪಾ ಪೀರು ಮದಕರಿ ಸೇರಿದಂತೆ ಸಾರಾಪುರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ವೇಳೆ ಶ್ರೀ ಮಾಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಸನ್ಮಾನ್ಯ ಶ್ರೀ ಪೃಥ್ವಿ ಕತ್ತಿ ಅವರನ್ನು ಸನ್ಮಾನಿಸಲಾಯಿತು.